Wednesday, 20 June 2012

ರಾಜ್ಯದಲ್ಲಿ ಅರ್ಧ ಬೆಲೆಗೆ ಔಷಧಿ: ಅಮೀರ್ ಎಫೆಕ್ಟ್!



ಇದೊಂದು ಸಂತೋಷದ ಸುದ್ದಿ. ರಾಜಸ್ಥಾನ ಸರ್ಕಾರದ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರವೂ ಬಡವರಿಗೆ ಅನುಕೂಲವಗುವಂತೆ ಜನೆರಿಕ್ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಕರ್ನಾಟಕ ಸರ್ಕಾರವೂ ತಾನೂ ಆಸ್ಪತ್ರೆಗಳಲ್ಲಿ ಜನೆರಿಕ್ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜನತಾ ಬಜಾರ್ ಔಷಧಿ ಅಂಗಡಿಗಳನ್ನು ಪ್ರಾರಂಭಿಸುವ ಯೋಜನೆಯನ್ನು ಇದೇ ಜೂನ್ ೨೧ರಿಂದ ವಿಕ್ಟೋರಿಯಾ ಆಸ್ಪತ್ರೆಯಿಂದ ಪ್ರಾರಂಭಿಸಲಿದೆ. 

ನಟ ಅಮೀರ್‌ಖಾನ್ ಅವರು ಸತ್ಯಮೇವ ಜನತೆ ಕಾರ್ಯಕ್ರಮದ ಮೂಲಕ ಬಡಜನತೆಗೆ ಸುಲಭ ದರಗಳಲಿ ಎಟುಕುವ ಜರೆರಿಕ್ ಔಷಧಿಗಳನ್ನು ಒದಗಿಸಲಾರದ ಸರ್ಕಾರಗಳ ಜಾಣಕುರುಡು ನೀತಿಯನ್ನು ಬಯಲಿಗೆಳೆದಿದ್ದರು. ಈ ನಿಟ್ಟಿನಲ್ಲಿ ರಾಜಾಸ್ತಾನ ಸರ್ಕಾರ ಮಾದರಿಯಾಗಿ ನಿಂತಿದ್ದನ್ನು ತಿಳಿಸುತ್ತಾ ಅದೇ ಮಾದರಿಯನ್ನು ಎಲ್ಲಾ ಸರ್ಕಾರಗಳೂ ಅನುಸರಿವುವಂತೆ ವಿನಂತಿಸಿಕೊಂಡಿದ್ದರು. ಪರಿಣಾಮವಾಗಿ ಮಹಾರಾಷ್ಟ್ರ ಸರ್ಕಾರವು ತಾನೂ ಜನೆರಿಕ್ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ವಿತರಿಸುವ ಕ್ರಮಕ್ಕೆ ಮುದಮಾಗಿತ್ತು. ಈಗ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಸಚಿವ ಎಸ್.ಎ.ರಾಮದಾಸ್ ಕೂಡಾ ಇಂತಹ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಎಲ್ಲಾ ಸರ್ಕಾರಿ ವೈದ್ಯರೂ ಸಹ ಜನೆರಿಕ್ ಔಷಧಗಳನ್ನೇ ಶಿಫಾರಸ್ಸು ಮಾಡುವ ಕುರಿತು ಆದೇಶ ಹೊರಡಿಸುವ ಮಾತನ್ನೂ ಸಚಿವರು ಹೇಳಿದ್ದಾರೆ. ಈ ಕೆಲಸ ಮೊದಲು ಆಗಬೇಕಿದೆ. ಸರ್ಕಾರಿ ವೈದ್ಯರುಗಳೇ ಏಕೆ ಎಲ್ಲಾ ವೈದ್ಯರೂ ಸಹ ಔಷಧಿ ಕಂಪನಿಗಳ ಆಮಿಷ ಆಸೆಗಳಿಂದ ಹೊರಬಂದು ನಿವಾದ ಅರ್ಥದಲ್ಲಿ 'ವೈದ್ಯೋನಾರಾಯಣ ಹರಿ'ಗಳಾಗಬೇಕಿದೆ. ಆಯ್ದ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಈ ವ್ಯವಸ್ಥೆಗೆ ಅವರು ಮುದಾಗಿರುವುದು ಸರಿಯಲ್ಲ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಈ ಪ್ರಯೋಜನ ಬಡ ರೋಗಿಗಳಿಗೆ ದಕ್ಕುವಂತಾಗಬೇಕು. 

ಏನೇ ಇರಲಿ. ಅಮೀರ್‌ಖಾನ್ ಕಾರ್ಯಕ್ರಮದ ಬಗ್ಗೆ ಮನಬಂದಂತೆ ಟೀಕಿಸಿ, ಆತನ ಉದ್ದೇಶವನ್ನು ಸಂಶಯದಿಂದ ನೋಡುವಂತೆ ಮಾಡಲು ಯತ್ನಿಸಿದ್ದವರಿಗೆ ಉತ್ತರ ಸಿಗುತ್ತಿದೆ. 

ಕೊನೆ ಚುಟುಕು: ವೈದ್ಯರ ಕುರಿತ ಅಮೀರ್ ಕಾರ್ಯಕ್ರಮಕ್ಕೆ ಅನೇಕ ಅಪ್ರಮಾಣಿಕ ವೈದ್ಯರೂ ತೀರಾ ಆಕ್ರೋಶ ವ್ಯಕ್ತಪಡಿಸಿ ಅಮೀರ್ ಕ್ಷಮೆ ಯಾಚಿಸಬೇಕು ಎಂದೆಲ್ಲಾ ಎಗರಾಡಿದ್ದರು. ಆದರೆ ಈ ಕುರಿತು ಸಂಸತ್ತಿನಲ್ಲಿ ಮಾತನಾಡಲು ಗುರುವಾರ ಅಮೀರ್‌ಖಾನ್‌ಗೆ ಅವಕಾಶ ಕಲಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.


ಸತ್ಯ ಮೇವ ಜಯತೇ!


No comments:

Post a Comment