Tuesday, 5 June 2012

ಹೂ ಜೊತೆಗೆ ನಾರು...

ಕೃಪೆ:-ಗಿರೀಶ್ ಕೆ ಅವರ ಬಯಲಬಿತ್ತಿ ಬ್ಲಾಗ್


ಅಮೀರ್ ಖಾನ್ನ ಸತ್ಯಮೇವ ಜಯತೇ' ಕಾರ್ಯಕ್ರಮ ಜಡ್ಡುಗಟ್ಟಿರುವ ಭಾರತದ ಮಧ್ಯಮ ವರ್ಗದ ಮನಸ್ಸುಗಳನ್ನು ಅಲ್ಲಾಡಿಸಲು ಶುರು ಮಾಡಿದೆ. ಜೊತೆಗೇ ಕಳೆದುಹೋಗಿರುವ ಟಿವಿ ಚಾನೆಲ್ಗಳ ಬದ್ಧತೆಯನ್ನೂ ಹುಡುಕಿ ತಂದು ಕನ್ನಡಿಯಂತೆ ಮುಖಕ್ಕೆ ಹಿಡಿಯುತ್ತಿದೆ.

ಇಂಥಾ ಹೊತ್ತಲ್ಲೇ ಅಮೀರ್ ಖಾನ್ ಜೊತೆಗೆ ಕಾರ್ಯಕ್ರಮದ ಸಾಚಾತನವನ್ನೇ ಸಿನಿಕತನದಿಂದ ಹೀಗೆಳೆಯುವ ಪ್ರಯತ್ನಗಳೂ ಶುರುವಾಗಿವೆ. ಡಬ್ಬಿಂಗ್ ಇಲ್ಲದೆ ಕನರ್ಾಟಕದಲ್ಲೂ ಆಪಾರವಾಗಿ ನೋಡುಗರನ್ನು ಸೃಷ್ಟಿಸಿಕೊಂಡಿರುವ ಕಾರ್ಯಕ್ರಮವನ್ನು ಹೊಟ್ಟೆಕಿಚ್ಚಿನ ಕಾರಣಕ್ಕೆ ವಿರೋಧಿಸುವ ಗೊಡ್ಡುಗಳೂ ಹುಟ್ಟುಕೊಂಡಿದ್ದಾರೆ. ಅಲ್ಲದೆ ಅಮೀರ್ ಖಾನ್ನ ವಾಣಿಜ್ಯ ಉದ್ದೇಶ ಹಾಗೂ ಶೋನ ನಾಟಕೀಯತೆಯನ್ನು ಬೊಟ್ಟು ಮಾಡಿ, ಕಾರ್ಯಕ್ರಮದ ಒಟ್ಟಾರೆ ಪರಿಣಾಮ ಮತ್ತು ಫಲಿತಾಂಶವನ್ನು ಮರೆಮಾಚುವ ಪ್ರಯತ್ನಗಳೂ ಶುರುವಾಗಿವೆ.

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸೈದ್ಧಾಂತಿಕ ಚರ್ಚೆಯ ಚೌಕಟ್ಟಿನಲ್ಲಿ ನಿರ್ದೇಶಕ ಬಿ.ಸುರೇಶ್ ಮತ್ತು ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಗಂಗಾಧರ್ ಮೊದಲಿಯಾರ್ ಅವರು ಎತ್ತಿರುವ ಪ್ರಶ್ನೆಯನ್ನು ನಿಷ್ಠುರವಾಗಿ ಚರ್ಚಿಸಲೇಬೇಕಿದೆ.

ಇವರಿಬ್ಬರ ವಾದದಲ್ಲೂ ಸಾಮಾನ್ಯವಾಗಿದ್ದ ಸಂಗತಿ ಅಂದರೆ ಕನ್ನಡದಲ್ಲೂ ಕೂಡಾ ಇಂತಹ ಕಾರ್ಯಕ್ರಮ ಈಗಾಗಲೇ ಮಾಳವಿಕಾ ಮತ್ತು ಶಿವರಾಜ್ಕುಮಾರ್ ಅವರು ನಡೆಸಿಕೊಟ್ಟಿದ್ದಾರೆ ಅನ್ನುವುದು ಮೊದಲನೆಯದು.ಸತ್ಯಮೇವ ಜಯತೇ'ಯಲ್ಲೂ ವಾಣಿಜ್ಯ ಉದ್ದೇಶಗಳಿವೆ. ಸಾಮಾಜಿಕ ಕಳಕಳಿ ಕಾಣುವುದಿಲ್ಲ. ಲಾಭಕ್ಕಾಗಿ ವಾಸ್ತವವನ್ನು ನಾಟಕೀಯಗೊಳಿಸಿ ಸಮಸ್ಯೆಯನ್ನು ಪರಿಹಾರ ಇಲ್ಲದೆ ಸರಳೀಕೃತಗೊಳಿಸಲಾಗುತ್ತಿದೆ ಅನ್ನುವುದು ಎರಡನೆಯದು.
ಅಮೀರ್ ಖಾನ್ ಜೊತೆಗೆ ಮಾಳವಿಕಾ ಅವರನ್ನು ಹೋಲಿಸಿರುವುದೇ ಅಸಹ್ಯ. ಏಕೆಂದರೆ ಮಾಳವಿಕಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರೊಬ್ಬ ನಿರೂಪಕಿ ಅಷ್ಟೇ. ಕುಟುಂಬದ ಸಮಸ್ಯೆಗೆ ಸಾಮಾಜಿಕವಾಗಿ ಪರಿಹಾರ ಕಂಡುಹಿಡಿಯುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ನಾಲ್ಕು ಗೋಡೆ ಯೊಳಗಿದ್ದುದನ್ನು ಬೀದಿಗೆ ತಂದು ಹಾದಿರಂಪ ಮಾಡಿದಂತಿತ್ತು ಅವರ ಕಾರ್ಯಕ್ರಮ. ಅದೆಷ್ಟೇ ಹೃದಯ ಹಿಂಡುವ ಸಮಸ್ಯೆ ಇದ್ದರೂ ಮಾಳವಿಕಾ ಅವರ ಗ್ಲಾಮರ್ ಕೊಂಚವೂ ಕಡಿಮೆಯಾಗದಂತೆ ಒಂದೂವರೆ ಕೆಜಿ ರೇಷ್ಮೆ ಸೀರೆ, ಮೇಕಪ್, ಲಿಪ್ಸ್ಟಿಕ್ ಸಮೇತ ಆ ಚಾನೆಲ್ ಅವರನ್ನು ನಿರೂಪಕಿಯಾಗಿ ಪ್ರದರ್ಶಿಸಿತ್ತು. ಇದರ ಆಚೆಗೆ ಕಾರ್ಯಕ್ರಮಕ್ಕೆ ಸಾಮಾಜಿಕ ಪ್ರಸ್ತುತತೆಯೇ ಇರಲಿಲ್ಲ.

ಅಮೀರ್ ಖಾನ್ ಎತ್ತಿಕೊಂಡಿರುವ ಸಮಸ್ಯೆಗಳು ಯಾರಿಗೂ ಗೊತ್ತಿಲ್ಲದ್ದಲ್ಲ. ಹಾಗೆಯೇ ಯಾರು ಬೇಕಾದರೂ ಕಾರ್ಯಕ್ರಮ ಮಾಡಬಹುದಾದದ್ದು. ಆದರೆ ಅದಕ್ಕೆ ಬೇಕಾಗಿರುವ ಇಚ್ಛಾಶಕ್ತಿ, ಅಧ್ಯಯನಶೀಲತೆ, ಕಾಳಜಿ ಮತ್ತು ಪರಿಣಾಮಕಾರಿಯಾಗಿ ಜನರನ್ನು ಮುಟ್ಟಿಸಲು ಬೇಕಾದ ಕಲಾವಂತಿಕೆ. ಇದಿಷ್ಟನ್ನೂ ಅಮೀರ್ ಖಾನ್ ತನ್ನ ತಂಡದ ಸಮೇತ ಜಾರಿಗೊಳಿಸಿದ್ದಾನೆ.
ತನ್ನ ಸ್ಟಾರ್ಗಿರಿಯನ್ನು ಸಾಮಾಜಿಕ ಹೋರಾಟ ವಾಗಿ, ಸಾಮಾಜಿಕ ಚಟುವಟಿಕೆಯಾಗಿ ಪರಿವರ್ತಿಸುತ್ತಿರುವುದು ಅಮೀರ್ ಖಾನ್ನ ಹೆಗ್ಗಳಿಕೆ. ತನ್ನ ಸಿನಿಮಾಗಳಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ನರ್ಮದಾ ಹೋರಾಟ, ಹಜಾರೆ ಉಪವಾಸಗಳಲ್ಲಿ ಪ್ರಚಾರವಿಲ್ಲದೆ ಭಾಗವಹಿಸಿ ಈಗಾಗಲೇ ತನ್ನನ್ನು ಸಾಬೀತುಗೊಳಿಸಿಕೊಂಡಿರುವ ಸ್ಟಾರ್, ಅಮೀರ್.ಸತ್ಯಮೇವ ಜಯತೇ' ಹೇಳುತ್ತಿರುವ ಸತ್ಯವನ್ನೇ ಪತ್ರಕರ್ತ ಪಿ.ಸಾಯಿನಾಥ್, ಅರುಂಧತಿ ರಾಯ್ ಅವರೂ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಆದರೆ ಅವರ ಮಾತು ಮತ್ತು ಮಾಧ್ಯಮ ಎಷ್ಟು ಜನರಿಗೆ ತಲುಪಿದೆ? ಹಾಗಂದ ಮಾತ್ರಕ್ಕೆ ಅವರು ಸಂವೇದನಾ ಶೀಲರಲ್ಲ, ಕಾಳಜಿಯುಳ್ಳವರಲ್ಲ ಎಂದು ಹೇಳಲಾಗುತ್ತದೆಯೇ?

ಅಮೀರ್ನ ಶ್ರೀಮಂತಿಕೆ ಇರುವುದು ಇಲ್ಲೇ. ಸತ್ಯವನ್ನು ತಲುಪಿಸಬೇಕಾಗಿ ರುವ ಜನಕ್ಕೆ ತಲುಪಿಸಬೇಕಾದ ರೀತಿಯಲ್ಲಿ ತಲುಪಿಸಿರುವ ಕಾರಣಕ್ಕೇ ಕಾರ್ಯಕ್ರಮ ಸಾರ್ಥಕತೆ ಕಂಡು ಕೊಂಡಿರುವುದು. ಅಮೀರ್ ಖಾನ್ ಸಾಯಿನಾಥ್, ಅರುಂಧತಿ ರಾಯ್ ರಷ್ಟು ಅಣ್ಣಾ ಹಜಾರೆ ಪ್ರಬುದ್ಧರಲ್ಲ. ಬುದ್ಧಿವಂತರೂ ಅಲ್ಲ. ಆದರೆ ಅತ್ಯಂತ ಸರಳವಾಗಿ ಬದುಕಿರುವ ಒಳ್ಳೆಯ ಮನುಷ್ಯ. ಹೆಚ್ಚಿನ ಮಾತಿಲ್ಲದೆ ಮೌನದಲ್ಲೇ ದೇಶವನ್ನು ಅಲ್ಲಾಡಿಸಿ ಬಿಡಲಿಲ್ಲವೇ?

ಇದರ ಅರ್ಥ ಇಷ್ಟೇ. ಜನಸಾಮಾನ್ಯರಿಗೆ ಒಣ ಸಿದ್ಧಾಂತ, ಪಾಂಡಿತ್ಯದ ಪ್ರಹಾರ ಬೇಕಿಲ್ಲ. ಅತೀ ಸರಳವಾಗಿ ಅವರ ಹೃದಯ ಮುಟ್ಟುವಂತೆ ಅವರನ್ನು ಕಾಡುತ್ತಿರುವ ನೋವನ್ನು, ಅದರ ಹಿಂದಿರುವ ಹುನ್ನಾರವನ್ನು ತೆರೆದು ತೋರಿಸಬೇಕಷ್ಟೇ. ತೋರಿಸುವುದರ ಜೊತೆಗೆ ತೋರಿಸುವವರ ಯೋಗ್ಯತೆ ಕೂಡಾ ಮುಖ್ಯವಾಗುತ್ತದೆ. ಇದೇ ಸತ್ಯಮೇವ ಜಯತೇ'ಯನ್ನು ಸಲ್ಮಾನ್ ನಡೆಸಿಕೊಟ್ಟಿದ್ದರೆ ಅದರ ಸಾಂದ್ರತೆ ಎಷ್ಟು ಕೆಳಮಟ್ಟದಲ್ಲಿ ಇರುತ್ತಿತ್ತು?
ಇದೇ ಅಮೀರ್ನ ಶಕ್ತಿ ಮತ್ತು ತಾಕತ್ತು.
ಹೀಗಿರುವಾಗ ಮಾಳವಿಕಾರನ್ನು ಅಮೀರ್ ಮಟ್ಟಕ್ಕೆ ಹೋಲಿಸುವುದು ಅತ್ಯಂತ ಅಸಭ್ಯ. ನವಿರಾಗಿ ಹೇಳಬಹುದಾದರೆ ಹೂ'ವಿನ ಜೊತೆಗೆ ನಾರೂ ಕೂಡಾ ಸ್ವರ್ಗ ಸೇರಿದಂತೆ!ಇನ್ನು ಕಾರ್ಯಕ್ರಮದ ವಾಣಿಜ್ಯ ಉದ್ದೇಶ ಹಾಗೂ ಅಮೀರ್ನ ಲಾಭ'ದ ಗುರಿಯನ್ನು ಪ್ರಶ್ನಿಸಲಾಗಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಕಂಪನಿ ಯವರನ್ನು ಮುಂದಿಟ್ಟು ಅಮೀರ್ನ ಸಾಚಾತನವನ್ನು ಪ್ರಶ್ನಿಸಲಾಗಿದೆ.
ಗಾಂಧಿಯನ್ನು ಬಡವನ ರೀತಿ ಕಾಣಿಸಲು ಬಿರ್ಲಾ ತಿಂಗಳಿಗೆ 500 ಡಾಲರ್ ಖಚರ್ು ಮಾಡುತ್ತಿದ್ದರು ಎಂದು ಸರೋಜಿನಿ ನಾಯ್ಡು ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.ಇಲ್ಲಿ ಗಾಂಧಿ ಸುಳ್ಳಾ? ಸರೋಜಿನಿ ನಾಯ್ಡು ಸುಳ್ಳಾ?
ಎರಡೂ ಸತ್ಯವೇ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬಿರ್ಲಾರ ಷಾಮಿಯಾನವನ್ನು ಗಾಂಧಿ ಆಶ್ರಯಿಸಿದ್ದರು. ಅಷ್ಟೇ ಏಕೆ ಬ್ರಿಟಿಷರೇ ತಂದ ಪ್ರಿಂಟಿಂಗ್ ಪ್ರೆಸ್ಗಳಲ್ಲೇ ಅಲ್ಲವೇ ಭಗತ್ ಸಿಂಗ್ನ ಕರಪತ್ರಗಳು ಮುದ್ರಿತ ವಾಗಿದ್ದು?ಹೀಗೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಣ್ಣ-ಪುಟ್ಟ ರಾಜಿಗಳ ಜೊತೆಗೇ ನಮ್ಮ ಕಾಳಜಿಗಳನ್ನು ಜಾರಿಗೊಳಿಸಬೇಕಾದ್ದು ಅನಿವಾರ್ಯ.ಹಾಗಂತ ಅಂಬಾನಿ ಅವರದ್ದೇ ಡ್ರಗ್ಸ್ ಕಂಪನಿ ಇದೆ. ಅವರದ್ದೇ ಆಸ್ಪತ್ರೆಯಲ್ಲಿ ವೈದ್ಯರ ತಂಡವೇ ಇದೆ.ಸತ್ಯಮೇವ ಜಯತೇ'ಯಲ್ಲಿ ಅಂಬಾನಿ ಆಸ್ಪತ್ರೆಯ ಯಾವ ವೈದ್ಯರೂ ಮೂತಿ ತೂರಿಸಿಲ್ಲ. ಇಡೀ ಮಹಾರಾಷ್ಟ್ರದಲ್ಲಿ ದೇವರ ಮಗ' ಎಂದು ಆರಾಧಿಸಲ್ಪಡುವ ಡಾ.ರವಿ ಬಾಪಟ್ರವರನ್ನು ತೋರಿಸಲಾಯಿತು. ಇವರ ಇಡೀ ಕುಟುಂಬ ಖಾಸಗೀ ವೈದ್ಯಕೀಯ ಕ್ಷೇತ್ರದ ಕುತಂತ್ರ, ಲಾಭಕೋರತನ, ಮೋಸ, ವಂಚನೆ ವಿರುದ್ಧ ಹೋರಾಡುತ್ತಲೇ ಬಂದಿದೆ. ಇವರು ಬರೆದಿರುವ ವಾರ್ಡ್ ನಂ.5 ಏಇಒ' ಹಾಗೂ ಪೋಸ್ಟ್ ಮಾರ್ಟಂ ಅನ್ನುವ ಎರಡು ಕಾದಂಬರಿಗಳು ವೈದ್ಯಲೋಕದ ನರಹಂತಕತನವನ್ನು ಬಿಚ್ಚಿಡುತ್ತವೆ.

ಭಾರತದ ಮಾಧ್ಯಮ ಜಗತ್ತಿನಲ್ಲಿ ಡ್ರಗ್ಸ್ ಮತ್ತು ವೈದ್ಯಲೋಕದ ಮಾಫಿಯಾಗಳ ವಿರುದ್ಧ ತನಿಖಾ ವರದಿಗಳು ಆಗ ಬೇಕಾದಷ್ಟು ಪ್ರಮಾಣದಲ್ಲಿ ಆಗಿಲ್ಲ. ಅದರಲ್ಲೂ ವಿದೇಶಿ ಕಂಪನಿಗಳ ಕ್ರೈಂ ಮತ್ತು ಮಾಫಿಯಾವನ್ನು ಬಿಚ್ಚಿಟ್ಟಿರು ವುದು ಕೂಡಾ ಕಡಿಮೆಯೇ.
ಇಂಥಾ ಹೊತ್ತಲ್ಲಿ ಎಲ್ಲಾ ಮಾಫಿಯಾಗಳಿಂದಲೂ ಟಾಗರ್ೆಟ್ ಆಗಿಸಿಕೊಳ್ಳುವ ಅಪಾಯವನ್ನು ಲೆಕ್ಕಿಸದೆ ಅಮೀರ್ ನಿಷ್ಠುರ ಸತ್ಯಗಳನ್ನು ಮಧ್ಯಮ ವರ್ಗದ ಜಡ್ಡುತನಕ್ಕೆ ಚಾಟಿ ಬೀಸುವ ರೀತಿಯಲ್ಲಿ ಬಿಚ್ಚಿಡುತ್ತಿದ್ದಾರೆ.
ನಾವು ಸಿನಿಕತನ ಬಿಡದಿದ್ದರೆ ಹೇಗೆ?

No comments:

Post a Comment